ದ್ವಾರಕೀಶ್ ಚಿತ್ರ ಲಾಂಛನದಲ್ಲಿ ದ್ವಾರಕೀಶ್ ಅವರು ನಿರ್ಮಿಸಿರುವ ‘ಆಟಗಾರ’ ಚಿತ್ರ ಸದ್ಯದಲ್ಲೇ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಸಂಸ್ಥೆಯ ೪೯ನೇ ಕಾಣಿಕೆ ‘ಆಟಗಾರ’.
ಕೆ.ಎಂ.ಚೈತನ್ಯ ನಿರ್ದೇಶಿಸಿರುವ ಈ ಚಿತ್ರದ ಸಹ ನಿರ್ಮಾಪಕರು ಯೋಗಿ ದ್ವಾರಕೀಶ್. ಅನೂಪ್ ಸೀಳಿನ್ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ಸತ್ಯ ಹೆಗ್ಡೆ ಅವರ ಛಾಯಾಗ್ರಹಣವಿದೆ. ಕಣ್ಣನ್ ಪರಮೇಶ್ವರನ್ ಚಿತ್ರಕ್ಕೆ ಕಥೆ ಬರೆದಿದ್ದು, ಚಿತ್ರಕಥೆಯನ್ನು ಕೆ.ಎಂ.ಚೈತನ್ಯ ಹಾಗೂ ಕಣ್ಣನ್ ಪರಮೇಶ್ವರನ್ ಬರೆದಿದ್ದಾರೆ. ರೋಹಿತ್ ಪಡಕಿ ಸಂಭಾಷಣೆ ಬರೆದಿರುವ ಈ ಚಿತ್ರದ ಹಾಡುಗಳನ್ನು ಡಾ:ವಿ.ನಾಗೇಂದ್ರಪ್ರಸಾದ್ ಹಾಗೂ ರೋಹಿತ್ ಪಡಕಿ ರಚಿಸಿದ್ದಾರೆ. ರವಿವರ್ಮ ಸಾಹಸ ನಿರ್ದೇಶನ, ಹರ್ಷ ನೃತ್ಯ ನಿರ್ದೇಶನ ಹಾಗೂ ಶಿವು ಕಲಾ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಚಿರಂಜೀವಿ ಸರ್ಜಾ, ಪಾರೂಲ್ ಯಾದವ್, ಮೇಘನರಾಜ್, ಅನಂತನಾಗ್, ದ್ವಾರಕೀಶ್, ಸಾಧುಕೋಕಿಲ, ರವಿಶಂಕರ್, ಅನುಪ್ರಭಾಕರ್, ಅಚ್ಯುತ, ಪ್ರಕಾಶ್ ಬೆಳವಾಡಿ, ಬಾಲಾಜಿ ಮನೋಹರ್, ಪವನ್, ಆರೋಹಿತ ಗೌಡ, ಸುನೇತ್ರ ನಾಗರಾಜ್, ರೋಹಿತ್ ಪಡಕಿ ಮುಂತಾದವರಿದ್ದಾರೆ.